Slide
Slide
Slide
previous arrow
next arrow

ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಆಗ್ರಹ: ಕರವೇಯಿಂದ ಪ್ರತಿಭಟನೆ ಎಚ್ಚರಿಕೆ

300x250 AD

ಕಾರವಾರ: ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಶೀಘ್ರದಲ್ಲೇ ರಸ್ತೆ ದುರಸ್ತಿ ಕಾರ್ಯ ನಡೆಸಬೇಕು. ಇಲ್ಲವಾದಲ್ಲಿ ಕರವೇಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರವೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿ-ಅಂಕೋಲಾ ಮಾರ್ಗದ ಕೋಳಿಕೇರಿ, ಹಳಿಯಾಳ ಕ್ರಾಸ್, ಆರತಿಬೈಲ್, ಅರಬೈಲ್ ಘಟ್ಟ ಪ್ರದೇಶ, ಗುಳ್ಳಾಪುರ, ರಾಮನಗುಳಿ, ಸುಂಕಸಾಳ, ಹೆಬ್ಬುಳ, ಸರಳೆಬೈಲ್, ಬಾಳೆಗುಳಿ ಸೇರಿದಂತೆ ಅಂಕೋಲಾದವರೆಗೂ ಹಲವು ಕಡೆಗಳಲ್ಲಿ ಹೆದ್ದಾರಿ ಸಂಪೂರ್ಣ ಹೊಂಡಮಯವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದೊಡ್ಡ ದೊಡ್ಡ ಹೊಂಡಗಳು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ. ಅದರಲ್ಲೂ, ಸಣ್ಣ ವಾಹನಗಳಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದ್ದು, ರಾತ್ರಿ ಸಮಯದಲ್ಲಿ ಹೊಂಡ ಗೋಚರಿಸದೇ ಸಾಕಷ್ಟು ಅಪಘಾತಗಳಾದ ಉದಾಹರಣೆಯೂ ಇದೆ ಎಂದರು.

ಇನ್ನು ಕೊರಕಲು ಬಿದ್ದ ಅರಬೈಲ್ ಘಟ್ಟದಂತಹ ಇಳಿಜಾರಿನ ಅಪಾಯಕಾರಿ ತಿರುವುಗಳಲ್ಲಿ ಸರಕು ತುಂಬಿದ ಲಾರಿಗಳು ಹಾಗೂ ಭಾರಿ ಗಾತ್ರದ ವಾಹನಗಳು ಪ್ರತಿನಿತ್ಯ ಒಂದಿಲ್ಲೊಂದು ಮುಗ್ಗರಿಸಿ ಬೀಳುತ್ತಿವೆ. ಹೆದ್ದಾರಿ ಹೊಂಡದಲ್ಲಿ, ಸಣ್ಣಪುಟ್ಟ ವಾಹನಗಳು ಸರ್ಕಸ್ ಮಾಡುತ್ತ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಶೀಘ್ರದಲ್ಲೇ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

300x250 AD

ಈ ರಸ್ತೆಯಲ್ಲಿ ನಡೆಯುವ ಅವಘಡಕ್ಕೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೇ ನೇರ ಹೊಣೆಯಾಗಿದ್ದು, ಶೀಘ್ರದಲ್ಲೇ ಎನ್‌ಎಚ್‌ಎಐನವರು ರಸ್ತೆ ದುರಸ್ತಿ ಕಾರ್ಯ ಆರಂಭಿಸದಿದ್ದರೆ ಕರವೇ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Share This
300x250 AD
300x250 AD
300x250 AD
Back to top